ಎಂ.ಎನ್.ಕೆ ಮೂವೀಸ್, ಕಿಚ್ಚ ಕ್ರಿಯೇಷನ್ಸ್ ಮತ್ತು ಕೊಲ್ಲಾ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಎಂ.ಎನ್.ಕುಮಾರ್, ಕೊಲ್ಲಾ ಪ್ರವೀಣ್ ನಿರ್ಮಿಸಿರುವ ‘ಮಾಣಿಕ್ಯ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಿಚ್ಚ ಸುದೀಪ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅರ್ಜುನ್ಜನ್ಯ ಸಂಗೀತ ನೀಡಿದ್ದಾರೆ. ಶೇಖರ್ಚಂದ್ರು ಛಾಯಾಗ್ರಹಣ, ವಿಶ್ವ ಸಂಕಲನ, ಗಾಯಿತ್ರಿರಘುರಾಂ, ಇಮ್ರಾನ್, ಕಲೈ ನೃತ್ಯ ನಿರ್ದೇಶನ, ವಿಜಯ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ರವಿಶ್ರೀವತ್ಸ ಸಂಭಾಷಣೆ ಬರೆದಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ, ರಮ್ಯಕೃಷ್ಣ, ರನ್ಯ, ವರಲಕ್ಷ್ಮೀ, ಅಶೋಕ್, ಶೋಭ್ರಾಜ್, ಪದ್ಮಾವಾಸಂತಿ, ಚಿತ್ರಾಶೆಣೈ, ಸಾಧುಕೋಕಿಲ, ಧರ್ಮ, ರೇಖಾ.ವಿ.ಕುಮಾರ್, ನಾಗಶೇಖರ್, ಟೆನ್ನಿಸ್ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.